Slide
Slide
Slide
previous arrow
next arrow

ಶ್ರೀಭದ್ರಕಾಳಿ ದೇವಿಗೆ 7 ಲಕ್ಷ ವೆಚ್ಚದ ರಜತ ಕವಚ ಅರ್ಪಣೆ

300x250 AD

ಗೋಕರ್ಣ: ದಕ್ಷಿಣದ ಕಾಶಿ ಎನಿಸಿಕೊಂಡಿರುವ ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀ ಭದ್ರಕಾಳಿ ದೇವಿಯ ಮಹಿಮೆಯು ಅಪಾರವಾದುದು ಇಂತಹ ಪುರಾಣ ಪ್ರಸಿದ್ಧ ಶ್ರೀ ಭದ್ರಕಾಳಿ ದೇವರಿಗೆ ಇಲ್ಲಿಯ ಮೇಲಿನ ಕೇರಿಯ ಶಿವಾನಂದ ಮಾಣೇಶ್ವರ ಗೌಡ ದಂಪತಿಗಳು ಶ್ರೀದೇವಿಗೆ 7 ಲಕ್ಷ ವೆಚ್ಚದ ರಜತ ಕವಚವನ್ನು ಅರ್ಪಿಸಿದರು.

ಗೋಕರ್ಣಕ್ಕೆ ಆಗಮಿಸುವ ಭಕ್ತರು ಸಾಮಾನ್ಯವಾಗಿ ಶ್ರೀ ಭದ್ರಕಾಳಿ ದೇವಿ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದು ವಾಡಿಕೆಯಂತಾಗಿದೆ. ಇಲ್ಲಿ ಪ್ರತಿವರ್ಷ ವಿವಿಧ ಹಬ್ಬದ ಸಂದರ್ಭದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ಹಾಗೆ ನವರಾತ್ರಿಯ ಸಂದರ್ಭದಲ್ಲಿ ಇಲ್ಲಿಯ ವಿಶೇಷ ದೀಪಾಲಂಕಾರ ಸೇರಿದಂತೆ ಸಾಕಷ್ಟು ಭಕ್ತರನ್ನು ತನ್ನೆಡೆ ಸೆಳೆಯುತ್ತದೆ. ಪ್ರತಿ ಶುಕ್ರವಾರ ವಿಶೇಷ ಹೂವಿನ ಅಲಂಕಾರದೊAದಿಗೆ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ದೇವಿಯ ಬಳಿ ಹರಕೆ ಹೊತ್ತವರು ತಮ್ಮದೇ ಆದ ಕಾಣಿಕೆಯನ್ನು ದೇವರಿಗೆ ಅರ್ಪಿಸುವ ವಾಡಿಕೆಯಿದೆ.

300x250 AD
Share This
300x250 AD
300x250 AD
300x250 AD
Back to top